ಈ History ಅಂದ್ರೇನೇ ಹಾಂಗ!! ತಿಳಿಯುವ ಕುತೂಹಲವಿದ್ದರೆ, ಓದುವ ಆಸಕ್ತಿಯಿದ್ದರೆ, ಮೆಚ್ಚುವ ಮನ¸ EzÀÝgÉ ಮಾತ್ರ ಇಷ್ಟವಾಗೋದು ಇಲ್ಲದಿದ್ದರೆ ಬೋರೋ ಬೋರ್!! ನನ್ನ ಕಾಲೇಜ್ ಕಾಮರ್ಸ ಹುಡುಗರು history ಅಂದ್ರೆ ಸತ್ತ ವಿಷಯವನ್ನು ಬದುಕಿದವರಿಗೆ ಹೇಳೋದು ಅಂತಾ kindle ಮಾಡ್ತಾರೆ. ಆಶ್ಚರ್ಯ ವೆಂದರೆ ಸತ್ತ ಮೇಲೇನೇ history create ಆಗೋದು. ಅವರಿಗೇನು ಗೊತ್ತು!!
ಬದುಕಿನ ವ್ಯಂಗ್ಯ ಏನೆಂದರೆ ಬದುಕಿದಾಗ ಮಾಡಿದ ಸಾಧನೆಗೆ ಹೂ ಹಾರ ಕೊಟ್ಟು ಸನ್ಮಾನಿಸಿದವರಿಗಿಂತ ಗೋರಿಯ ಮೇಲೆ ಹಾಕಿ ಸನ್ಮಾನಿಸುವವರೇ ಹೆಚ್ಚು !!
ದಿನದ ಮೊದಲ ಪೀರಿಯಡ್ ಗಳಲ್ಲಿ ವಿದ್ಯಾರ್ಥಿಗಳಲ್ಲಿ ಇರುವ ವಿಷಯ ಸ್ವೀಕರಣಾ ಅಸಕ್ತಿ ಬರು ಬರುತ್ತಾ ನಾಲ್ಕು ಐದನೇ ಅವಧಿಗೆ ಕಡಿಮೆಯಾಗುತ್ತದೆ. ಅಷ್ಟೊತ್ತಿಗೆ ಹೊಟ್ಟೆ ತಾಳವನ್ನೂ ಹಾಕುತ್ತಿರುತ್ತದೆ. ಇತಿಹಾಸ ವಿಷಯದ ನನ್ನ ಪೀರಿಯಡ್ ಗಳು ನಾಲ್ಕು ಐದನೇ ಪೀರಿಯಡ್ ಗಳೇ ಜಾಸ್ತಿ ಇದ್ದು ವಿದ್ಯಾರ್ಥಿಗಳ ಮನಸ್ಸನ್ನು ಹಿಡಿದಿಡುವದೇ ಪ್ರೊಫೆಸರ್ ಗಳಿಗೆ ದೊಡ್ಡ ಸವಾಲು.
ಬೋರ್ ಆದ ಮನಸ್ಸುಗಳಿಗೆ ಪಾಠ ಮಾಡಲು ನಾನು ಭಿನ್ನ ತಂತ್ರಗಳಿಗೆ ಮೊರೆ ಹೋಗದಿದ್ದರೆ ವಿದ್ಯಾರ್ಥಿಗಳು ಮನೆಗೆ ಹೋಗುತ್ತಾರೆ. ಹೀಗೆ ಆಸಕ್ತಿ ಮೂಡಿಸಲು ಪಾಠದ ಮಧ್ಯ ದಲ್ಲಿ ಕೆಲವು G K ಪ್ರಶ್ನೆ ಗಳನ್ನು, ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳನ್ನು ಕೇಳುವದರ ಮೂಲಕ, Motivational short story ಹೇಳುವದು, live example ಗಳನ್ನು ಕೊಡುವದು ಮತ್ತು ಕನ್ನಡ ಸಾಹಿತ್ಯದ ಕೆಲವು ಸಾಲುಗಳನ್ನು ಸಾಂದರ್ಭಿಕವಾಗಿ ಬಳಸುವದುಂಟು. ಅದು ಕೇವಲ ನನ್ನ ಆಸಕ್ತಿ ಯಷ್ಟೇ ಅಲ್ಲ ವಿದ್ಯಾರ್ಥಿಗಳು ಸಾಹಿತ್ಯವನ್ನು ಓದಲಿ ಮತ್ತು modern world ಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಲಿ, ZÁjvÀæöå, ¥ÁæªÀiÁtÂPÀvÉ ಅಳವಡಿಸಿಕೊಂಡು ಗಲ್ಲಿಗಲ್ಲಿಗೊಂದು ನಿರ್ಮಾಣ ವಾಗುತ್ತಿರುವ ಪೋಲೀಸ್ ಸ್ಟೇಷನ್ ಗಳನ್ನು ಮತ್ತು ಪೋಲೀಸ್ ರ ಸಂಖ್ಯೆಯನ್ನು ಕಡಿಮೆಗೊಳಿಸಲಿ ಅಂತ ಅಷ್ಟೇ!!
ವಿಷಯಗಳನ್ನು ಒಂದನ್ನೊಂದು ಸಹಸಂಬಂಧಿಸಿ (correlation ) ಹೇಳೋದು ಬೋಧನಾ ಪದ್ಧತಿಗಳಲ್ಲೊಂದು. ಕನ್ನಡ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಹೀಗೆ ಬೇರೆಬೇರೆ ವಿಷಯಗಳ ಜೊತೆ ಇತಿಹಾಸವನ್ನು ಸಹಸಂಬಂಧಿಸಿ ಹೇಳುವದನ್ನು ಬಿ.ಇಡಿ.ಕಲಿಯುವಾಗಲೇ ಕಲಿತಿದ್ದೆ.
ಹೀಗೆಯೇ ಮಧುರ ಚೆನ್ನ ರು ಗೋಲಗುಮ್ಮಟದ ಬಗ್ಗೆ ಬರೆದ ಚುಟುಕು
" ಏಳು ಗುಮ್ಮಟವೇ ಏಳು
ಏಳು ಮಾತಿನ ಗುಮ್ಮಟವೇ
ಏಳು
ನೀ ಎದ್ದರೆ, ಕನ್ನಡವೇ ಎದ್ದೀತು
ಗೋರಿಗಿಷ್ಟು ಬೆಲೆ ಕೊಟ್ಟವರು
ಬಾಳಿಗೆಷ್ಟು ಬೆಲೆ ಕೊಟ್ಟಿದ್ದರು
ಎಂಬುದನ್ನು ನಡೆದು ತೋರಿಸಲು
ನೀ ಏಳು"
ಎಂಬ ಸಾಲುಗಳನ್ನು ಬಹುಮನಿ ಸಾಮ್ರಾಜ್ಯದ ಕೊಡುಗೆಗಳನ್ನು ವಿವರಿಸುವ ಸಂದರ್ಭಗಳಲ್ಲಿ ಹೇಳಿದ್ದುಂಟು. ಏಕೀಕರಣ ಚಳುವಳಿ ಪಾಠದಲ್ಲಿ ಹುಯಿಲಗೋಳ ನಾರಾಯಣರಾಯರ
" ಉದಯವಾಗಲಿ ನಮ್ಮ ಚಲುವಕನ್ನಡ ನಾಡು" ವಿಜಯನಗರ ಸಾಮ್ರಾಜ್ಯದ ಪಾಠದಲಿ " ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ,
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ " ಎಂಬ ಸಾಲುಗಳು, ಹಾಗೆಯೇ ಕನ್ನಡ ಸಾಹಿತ್ಯದ ಅಲಂಕಾರಗಳು, ಉಪಮೇಯ ಉಪಮಾನ ಮುಂತಾದ ಉದಾಹರಣೆಗಳನ್ನು ಕೊಡುತ್ತಾ ಪಾಠ ಮಾಡುವದು ನನ್ ಹವ್ಯಾಸ. ಇತ್ತೀಚೆಗೆ ರೈಲ್ವೆ ಫ್ಲಾಟಫಾರಂ ನಿಂದ ಬಾಲಿವುಡ್ ಬದುಕಿಗೆ Life ನ sim card ಬದಲಿಸಿಕೊಂಡ, ಜೀವನ ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಬದಲಾಗಬಹುದು ಎನ್ನುವದಕ್ಕೆ ತಾಜಾ ಮತ್ತು live ಉದಾಹರಣೆಯಾದ "ರಾನು ಮೊಂಡಲ್" ರ
"ತೇರೀಈ
ಮೇರೀಈ
ತೇರೀಈ ಮೇರೀಈ
ತೇರಿ ಮೇರಿ ಕಹಾನಿ"
ಗೀತೆಯನ್ನು ಯಮಕಾಲಂಕಾರಕ್ಕೆ ಉದಾಹರಣೆ ಹೇಳಿ ನನ್ನ profession ಜೀವಂತ ( live)ವಾಗಿರಿಸಲು ಪ್ರಯತ್ನಪಟ್ಟಿರುವೆನು.
ಅಂದು ಶನಿವಾರವಾದ್ದರಿಂದ half day Class ಮುಗಿಸಿ ಅವಸರಿಸಿ ಬಸ್ ಹತ್ತಿ ಊರಿನ ದಾರಿ ಹಿಡಿದೆ. ಬೀಳಗಿ ಯಿಂದ ಸ್ವಲ್ಪ ದೂರ ಕ್ರಮಿಸಿತು. ಮುಂದಿನ ಸೀಟ್ ನಿಂದ ನಡೆದ ಮಾತುಕತೆ
ನನ್ನ ನೀಲಿ ನಯನದಲಿ ಓಲಾಡಿ ತೂಗುಯ್ಯಾಲೆ ಆಡಬೇಕೆಂದು ಮೆತ್ತಗೆ ಹತ್ತಿರ ಬರಲು ಹವಣಿಸುತ್ತಿದ್ದ ನಿದ್ರಾದೇವಿ ಹೇಳದೇ ಹಿಂಜರಿದು ನನ್ನ ನಿದ್ದೆ ಕೆಡಿಸಿದಳು. ಮೆತ್ತಗೆ ಗಮನಿಸಿದೆ ಅದು ಕಾಲೇಜ್ ಹುಡುಗರ ಸಂಭಾಷಣೆಯಾಗಿತ್ತು. ಅದರೂ ಸುಮ್ಮನೆ ಕಣ್ಣುಮುಚ್ಚಿ ಬೆಕ್ಕು ಧ್ಯಾನಕ್ಕೆ ಕುಳಿತಂತೆ ಕುಳಿತುಕೊಂಡಿದ್ದೆ. ಆ ಹುಡುಗರ ಪರಸ್ಪರ ಸಂಭಾಷಣೆ ಹೀಗೆ ಸಾಗಿತ್ತು. ಅದರಲ್ಲೊಬ್ಬ
"ಹಾಂಗಲ್ಲಲೇ ಹನುಮ, ಮೊನ್ನೆ ಸರ್ ಕ್ಲಾಸ್ ಗೆ ಬಂದರಪಾ. ನಾನು ಮೊದಲೇ ಊಹೆ ಮಾಡಿದ್ದೆ. ಏನಾದರೂ ಪ್ರಶ್ನೆ ಕೇಳಿಯೇ ಪಾಠ ಶುರು ಮಾಡ್ತಾರ ಅಂತ . ಬಂದ ತಕ್ಷಣ
"siblings ಅಂದ್ರ ಏನು?" ಅಂತ ಕೇಳಿದರು. ಯಾರೂ ಉತ್ತರ ಹೇಳಲಿಲ್ಲ. ಹುಡುಗಿಯರಾದರೂ ಹೇಳ್ತಾರಪಾ ಅಂದ್ರ ಅವು ಹೇಳಲಿಲ್ಲ. ಸರ್ ಒಂದು clue ಕೊಟ್ಟರು.
"ರಾಜಕುಮಾರ, ಅಂಬರೀಷ,
ಅಭಿಜಿತ್ ಕೂಡಿ ನಟಿಸಿದ ಕೌಟುಂಬಿಕ ಚಲನಚಿತ್ರ" ಎಂದರು.
ನಮಗೆಲ್ಲ ಕಿಚ್ಚ ಸುದೀಪ, ಡಚ್ಚು ಬಾಸ್ , ಅಲ್ಲು ಅರ್ಜುನ್ ಇವರ ಸಿನೆಮಾನ ಜಾಸ್ತಿ ನೋಡಿದ್ದು. ರಾಜಕುಮಾರ್ ಪಿಕ್ಚರ್ ಎಲ್ಲಿ ನೆನಪಾಗ್ತವೆ??
ಉತ್ತರ ಗೊತ್ತಾಗಲಿಲ್ಲ. ಲಾಸ್ಟ ಬೆಂಚ್ ನಾಗ ಕೂತಿದ್ದ ಗಿರಿಸಾಗರದ ಮಲ್ಲ "ಒಡಹುಟ್ಟಿದವರು" ಅಂತ ಹೇಳಿದ.
ಸರ್ "ಹೌದು" ಅಂದರು.
"ಮತ್ತೆ ಸಹೋದರಿಗೆ ಇಂಗ್ಲಿಷ್ ನಲ್ಲಿ ಏನಂತ ಕರೀತೀರಿ"
ಅಂದರು.
ಎಲ್ಲಾರು sister ಅಂತ್ಹೇಳಿ ಹೇಳಿದಿವಿ.
Sister ಅಂದ್ರ ಸಹೋದರಿ ಅಂತ ಸರಿ .
"ಸಹೋದರಿ ನಿಮಗಿಂತ ದೊಡ್ಡವರಾಗಿದ್ದರೆ ಕನ್ನಡಲ್ಲಿ ಏನಂತ ಕರೆಯುವಿರಿ "
ಅಂದರು. ನಾವೆಲ್ಲ ಖುಷಿಯಿಂದ ಅಕ್ಕ ಎಂದೆವು.
"ಹಾಗಿದ್ದರೆ ನಿಮ್ಮ ಅಕ್ಕನ ಹೆಸರು ಮಹಾದೇವಿ ಆಗಿದ್ದರೆ ?" ಎಂದರು. ನಮಗರಿವಿಲ್ಲದೇ
"ಅಕ್ಕ ಮಹಾದೇವಿ" ಎಂದೆವು. ಹಾಗಿದ್ದರೆ ಇವತ್ತು ಅಕ್ಕಮಹಾದೇವಿ ಪಾಠ ಅಭ್ಯಾಸ ಮಾಡುವ ಎಂದು ಬೋರ್ಡ್ ಮೇಲೆ "ಅಕ್ಕಮಹಾದೇವಿ" ಅಂತ ಬರೆದು ಪಾಠ ಶುರುಮಾಡಿದರು. ನನಗ ಪ್ರಾಣೇಶ ಮಾಮಾನ ಜೋಕ್ ನೆನಪಾಯ್ತಪಾ.
" ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನ್ನು ಏಕೆ ಮದುವೆಯಾದಳು"? ಅಂತ. ಸರ್ ಏನಾದರೂ ಆ ಪ್ರಶ್ನೆ ಕೇಳಿದ್ದರೆ ನಾನು decide
ಮಾಡಿದ್ದೆ ನೋಡು
" ಅದು ಆಕಿನ ಇಷ್ಟ ರಿ ಸರ್, ಅದನ್ನು ಕೇಳಾಕ ನಾವ್ಯಾರು , ನೀವ್ಯಾರು? "
ಅಂತ ಹೇಳಾಣ ಅಂತ.
ಆದ್ರ ಸರ್ ಆ ಪ್ರಶ್ನೆ ಕೇಳಲಿಲ್ಲ.
ಸರ್ ಏನು ಹೇಳಬೇಕು ಅಂತ ಅನಕೊಂಡಿರ್ತಾರ ಅದನ್ನು ನಮ್ಮ ಬಾಯಿಯಿಂದ ತೆಗೀತಾರ.
History ಅಂದ್ರನ ಗಿಚ್ಚ ನೋಡು " ಅಂದ.
ಮತ್ತೊಬ್ಬ ಶುರು ಮಾಡಿದ.
" ಅಲ್ಲ ಲೇ ಬಸ್ಯಾ, ಕಾಳಿದಾಸ ಕಾವ್ಯ ಬರೆದಾನಲ್ಲ,
" ಮೇಘಸಂದೇಶ" ಅದರಲ್ಲಿ ಮೋಡಗಳು ಪ್ರೇಮಸಂದೇಶಗಳನ್ನು ತಗೊಂಡು ಹೋಗಿ ಪ್ರಿಯತಮೆಗೆ ಮುಟ್ಟಿಸುತ್ತಿದ್ದವಂತೆ. ನಮ್ಮ ಕೈಯಾಗ ಸ್ಮಾರ್ಟ ಫೋನ್ ಅದಾವಲೆ,
msg ಕಳಿಸಿದರೆ ಅವರ ಮನ್ಯಾಗ ಯಾರಾದರೂ ಓದಿ ಬಿಟ್ಟಾರು ಅಂತ ಭಯದಿಂದ msg ಕಳಿಸಿಲ್ಲ. ಕಾಳಿದಾಸ ಈಗೇನಾದರೂ ಇದ್ದಿದ್ದರೆ ಹತ್ತು ಸಾವಿರ ಕೊಟ್ಟು ಫೊನ್ ತಗೋಳ್ಳೊ ಬದಲು ಕಾಳಿದಾಸನನ್ನೇ msg ಮುಟ್ಟಿಸಾಕ ಬುಕ್ ಮಾಡ್ತಿದ್ದೆ " ಅಂದ.
ಕಿಟಕಿ ಬಾಜು ಕುಳಿತಿದ್ದ
ಮೂರನೇ ಹುಡುಗ ಮಧ್ಯೆ ದಲ್ಲೇ ಬಾಯಿ ಹಾಕಿ
" ಹಾಗಲ್ಲೋ , ಈ ಹಿಸ್ಟರಿ ಸರ್ ಏನ್ ಹೇಳ್ತಾರಲೇ? ಗಿಚ್ಚ ನೋಡು.
ಒಂದು ತಾಸು ಹೆಂಗ ಹೋಗುತ್ತ ಅಂತಾನೆ ಗೊತ್ತಾಗಲ್ಲ. ಬೇಂದ್ರೆ ಬರೆದ ಪದ್ಯ ,
"ನೀ ಹಿಂಗ ನೋಡಬ್ಯಾಡ ನನ್ನ ,
ನೀ ಹಿಂಗ ನೋಡಿದರೆ ನನ್ನ
ತಿರುಗಿ ನಾ ಹೆಂಗ ನೋಡಲೇ ನಿನ್ನ"
ಅಂತ ಬರೆದ ಹಾಡು, ಬೇಂದ್ರೆ ತನ್ನ girl friend ಗೆ ಬರೆದಿರಬೇಕು ಅನಕೊಂಡಿದ್ದೆ. ಆದರೆ ಬೇಂದ್ರೆಯವರು ತಮ್ಮ ಹೆಂಡತಿ ಮುಖ ನೋಡಿ ಹಾಂಗ ಬರೆದರಂತ. ಸರ್ ಎಲ್ಲೆಲ್ಲಿ ಸ್ಟೋರಿ ತಂದು ಹೇಳ್ತಾರಪಾ, ನಾವು ಅನಕೊಂಡಿದ್ದ ಬೇರೆ ಅದು ಇರೋದ ಬೇರೆ, ಹೊಗ್ಗೋ ಅವನ "
ಅಂದ. ಏಕಕಾಲಕ್ಕೆ ಮೂವರು ನಕ್ಕರು. ಪಕ್ಕದ ಹುಡುಗ
" ನೀ ಏನರ ಹೇಳು ದೋಸ್ತ, ಡಿಗ್ರಿ ಅಂದ್ರ ಮಸ್ತ ಐತಿ, ಮಜಾ ಮಾಡಾಕ ಹೇಳೋರು ಇಲ್ಲ,
ಕೇಳೋರು ಇಲ್ಲ,
ಆದ್ರ ವರುಷಕ್ಕ ಎರಡು ಸೆಮಿಸ್ಟರ್ ಇಟ್ಟು ತಪ್ಪು ಮಾಡ್ಯಾರ ನೋಡು" ಅಂದ.
ಅಷ್ಟೊತ್ತಿಗೆ ಸುನಗ ಕ್ರಾಸ್ ಬಂತು. ಹುಡುಗರು ಇಳಿಯಬೇಕು ಅಂತ ಎದ್ದು ನಿಂತರು. ನನಗೆ ಅಚ್ಚರಿಯಾಯಿತು. ನೋಡಿದರೆ ಅವರೆಲ್ಲ ನನ್ನ ಕಾಲೇಜ್ ನ ೫ನೆ ಸೆಮಿಸ್ಟರ್ ವಿದ್ಯಾರ್ಥಿಗಳಾದ ಬಸಯ್ಯ , ನಾಗರಾಜ, ಹನುಮಂತ. ನನ್ನ ನ್ನು ನೋಡಿದ ತಕ್ಷಣ ಅವರಲ್ಲಿದ್ದ ಉತ್ಸಾಹ, ಬಲ ಎರಡೂ ಅವರು ಬಸ್ಇಳಿಯುವದಕ್ಕಿಂತ ಮೊದಲೇ ಅವರನ್ನು ಬಿಟ್ಟು ಇಳಿದು ಹೋಗಿದ್ದವು. "ನಮಸ್ಕಾರ ಸರ್" ಅಂತ ಹೇಳಿ ನಾಚಿಕೆ ಮತ್ತು ಪಾಪಪ್ರಜ್ಞೆಯಿಂದ ಇಳಿದು ಹೋದರು.
"ನಾವು ಮಾತಾಡಿದ್ದು ಸರ್ ಕೇಳಿಸಿಕೊಂಡಾರ ಲೇ" ಅಂತ ಇಡೀ story ಯನ್ನು ಇರೋಬರೋ ಗೆಳೆಯ ರಿಗೆ ಫೊನ್ ಮಾಡಿ ಹೇಳಿದ್ದೇ ಬಂತು.
ನನಗ FUÀ ಗೊತ್ತಾಯ್ತು. ಹುಡುಗರು History ಯಾಕ fail ಆಗ್ತಾರ ಅಂತ?!!!!!!.

No comments:
Post a Comment